ಹೂ ಕಣೋ ನೀನಂದ್ರೆ ನಂಗಿಷ್ಟ!!
ಒಂದು ಸಲ ಅಲ್ಲ ಸಾವಿರ ಸಲ ನಿನ್ನ ಹೆಸರನ್ನ ಕೂಗ್ತಾ ಇರ್ತೀನಿ, ಏನೋ ಇವಾಗ? ನಾನು ಅಂದ್ರೆ ನಿಂಗೆ ಎಷ್ಟು ಇಷ್ಟಾ ಅಂತ ಪದೇ ಪದೇ ಕೇಳ್ತಾನೆ ಇರ್ತೀನಿ ನಿಂಗೇನಾದ್ರೂ ತೊಂದ್ರೇನಾ ಉತ್ತರ ಕೊಡೋಕೆ?
ಬರಗಾಲದಲ್ಲಿ ಸುರಿದ ತುಂತುರು ಮಳೆಹನಿಯಂತೆ ನೀ ನನಗೆ ಸಿಕ್ಕಿದ್ದು ನೆನಪಿದೆಯೇನೋ? ಅದೇನೋ ಭಯಂಕರ ವಾಗಿ ಸದ್ದುಮಾಡ್ತಿದ್ದೆ ಮೊದಮೊದಲೆಲ್ಲ , ಎಷ್ಟು ಅಹಂಕಾರವಿತ್ತು ನಿನಗೆ, ನನ್ನ ಮೂದಲಿಸಿ ಹಿಂಸಿಸಿ ಹಂಗಿಸಿ ಮತಾಡಿಸ್ತಿದ್ದೆ. ವಂಡರ್ ಗಪ್ಪೆ ಅಂತೆಲ್ಲ ಕರೀತಿದ್ಯಲ್ಲೋ ಬಿಳಿ ಜಿರಳೆ.. ಅದ್ಯಾವಾಗ ನಿನ್ನ ಪ್ರೇಮ ಪಾಶದಲ್ಲಿ ಸಿಲುಕಿದ್ನೋ ನಾ ಕಾಣೆ. ಎಂದೂ ದೇವರಿಗೆ ಕೈ ಮುಗಿಯದವಳು ಅವತ್ತು ಶರಣಾಗಿದ್ದೆ. ತುಪ್ಪದ ದೀಪದ ಪುಣ್ಯ ಅವತ್ತು ದೇವರ ಪಾಲಿಗಿತ್ತು. ನಾ ಹಸನಾಗಿದ್ದೆ ಹಾಡಿ ಕುಣಿದಿದ್ದೆ. ಬಹುಶಃ ನನ್ನ ಖುಷಿಯ ಚೀರಾಟ ದೆವರಿಗೂ ತಲುಪಿದ್ದಿರಬೇಕು, ಮಳೆರಾಯ ಧೋ ಅಂತ ಸುರಿದಿದ್ದ ಭೂರಮೆಯ ಜೊತೆ ನಾನೂ ತೊಯ್ದು ತೊಪ್ಪೆಯಾಗಿದ್ದೆ. ಪ್ರಥಮಬಾರಿಗೆ ಪುಳಕಗೊಂಡಿದ್ದೆ. ಅವತ್ತೇ ಕಣೋ ನಾನು ತೀರಾ ದೊಡ್ಡವಳಾಗಿಬಿಟ್ಟಿದೀನಿ ಅನ್ಸಿದ್ದು. ಎಲ್ಲ ನಿನ್ನಿಂದಾನೆ ಕಣೋ ಪಾಪಿ.
ಪಾಪದ ಈ ಹುಡುಗೀನ ಬುಟ್ಟಿಗೆ ಹಾಕ್ಕೊಂಡು ಹೆಂಗೆ ಮೆರಿತಿದಿಯ ನೋಡು. ಕೈಗೆ ಸಿಗು, ಮೈ ಕೈ ಪರಚಿ ಹಾಕದಿದ್ರೆ ನಾನು ಪೂರ್ವಿಯೇ ಅಲ್ಲ. ನನ್ನ ಹೆಸರನ್ನ ನಿನಗಿಷ್ಟದ ಹಾಗೆ ಸುಬ್ಬುಲಕ್ಷ್ಮಿ ಅಂತ ಬದಲಾಯಿಸಿಕೊಳ್ಳೊದು ನಿಶ್ಚಿತ ನೋಡು.
ಲೋ ಗೆಳೆಯ. ನೀನಂದ್ರೆ ನಂಗಿಷ್ಟ ಕಣೋ. ನೀನೇ ನನ್ನ ಪರಪಂಚ ಕಣೋ. ಸಾವಿರ ಕೋಟಿ ವರುಶಗಳನೂ ಕೂಡ ನಿನ್ನ ಜೊತೆಗೆ ಕಳೆಯುವ ಆಣೆ ಅದ್ಯಾವಾಗ್ಲೋ ಮಾಡಾಗಿದೆ ಗೊತ್ತಾ?. ಮಳೆಗಾಲದಲ್ಲಿ ನಿನ್ನ ಗುಬ್ಬಿಯಂತೆ ತಬ್ಬಿ ಓಡಾಡಿದ ದಿನಗಳ ಅದ್ಹೇಗೋ ಮರೀಲಿ?
ನಿನ್ನ ಕರ್ಕಶ ಕಂಠದ ಸುಂದರ ಹಾಡುಗಳನ್ನ ಕೊಲೆ ಮಾಡಬೇಕೆನಿಸುತ್ತಿದ್ದಿದ್ದೂ ನಿಜ ಪುಣ್ಯಾತ್ಮ. ನಿನ್ನ ಆಲಿಂಗನದಲ್ಲಿ ಅದೂ ಜೋಗುಳವೇ.
ಅಪ್ಪ ಅಮ್ಮ ಹತ್ತಿರ ಇಲ್ಲವೆಂಬ ಕೊರಗು ನೀಗಿಸಿದವ ನೀನೇ ಅಲ್ಲವೆನೋ? ನಿನ್ನ ತೊಡೆಯ ಮೇಲೆ ಮಲಗಿ ಅದೆಷ್ಟು ಪುಸ್ತಕಗಳ ಓದಿಲ್ಲ ಹೇಳು. ಅದೆಷ್ಟು ಸಾವಿರ ಸುಂದರ ಸ್ವಪ್ನಗಳ ಕಂಡಿಲ್ಲ ಹೇಳು. ನಿನಗೆ ತಿಳಿಯದ್ದು ಏನಾದರೂ ಇದೆಯಾ ಅನ್ನುವ ಪ್ರಶ್ನೆ ನನಗೆ ಇನ್ನೂ ಇದೆ. ನನಗೆ ಧೋ ಅಂತ ಸುರಿಯುವ ಮಳೆಯ ನಡುವೆ ತಣ್ಣನೆ ಐಸ್ಕ್ಯಾಂಡೀ ಸವಿಯುವುದು ಇಷ್ಟ ಅಂತ ನಿಂಗ್ಯಾರೋ ಹೇಳಿದ್ದು? ನನಗೆ ಹಸಿರು ಬಣ್ಣವಿಷ್ಟ, ಉಟಕ್ಕೆ ಅಪ್ಪೆ ಮಿಡಿ ಉಪ್ಪಿನಕಾಯಿ ಇಷ್ಟ, ತಿಳಿಗುಲಾಬಿ ಬಣ್ನದ ಕೊಡೆ ಇಷ್ಟ, ಶಿವಮೊಗ್ಗೆಯ ಆಸುಪಾಸಿನ ಬಟಾ ಬಯಲುಗಳಲಿ ದಾರ ಕಾಡಿದ ಗಾಳಿಪಟದ ಹಾಗೆ ನನ್ನ ಪುಟ್ಟ ಸೈಕಲ್ಲಿನಲಿ ಕೂತು ಊರು ಸುತ್ತುವುದಿಷ್ಟ, ಕದ್ದು ತಿನ್ನುವ ಪೇರಳೆ ಇಷ್ಟ, ಇವೆಲ್ಲದರ ಮಾಹಿತಿ ನಿನಗ್ಯಾರೋ ಕೊಟ್ಟೊರು? ಒಟ್ಟಾರೆ ನನ್ನ ಹಾಳು ಮಾಡಿದ್ದು ನೀನೇ. ನನಗೆ ಬೇಕಿರ್ಲಿಲ್ಲ ಈ ಪ್ರೀತಿ ಪ್ರೇಮ ಪ್ರಣಯ,! ಯಾತನೆ ಕಣೋ ನೀ ಇಲ್ದೆ. ಆದರೂ ನಿನ್ನ ಜೊತೆಗಿದ್ದ ಸಮಯದ ನೆನಪೇ ಒಂಥರಾ ಹಿತ.
ನೀ ಜೊತೆಗಿದ್ರೆ ನನಗದೇಷ್ಟು ಧರ್ಯ ಗೊತ್ತಾ? ಸಾವಿರ ಆನೆಯ ಬಲ. ನಿನ್ನ ಕೆನ್ನೆ ಕಚ್ಚಿ ತಿಂದು ಬಿಡುವಾ ಅನ್ನಿಸುತ್ತೆ ಕಣೋ ರಾಕ್ಷಸ. ನಿನಗೆ ನೋಯುತ್ತಲ್ವಾ ಅಂತ ಸುಮ್ಮನಿದಿನಿ ಅಷ್ಟೇ. ಹಾ ನನ್ನ ಗೆಳತಿಯರಿಗೆಲ್ಲ ಒಂದು ಸಾರ್ತಿ ವಾರ್ನ್ ಮಾಡಿದೀನಿ. ನೀ ನನ್ ಜೊತೆ ಇರೋವಾಗ ಅವರು ಹತ್ತಿರ ಸುಳಿಯುವ ಹಾಗಿಲ್ಲ ಅಂತ. ಯಾರಿಗೊತ್ತು ಯಾರಾ ದೃಷ್ಟಿ ಹೇಗಿರುತ್ತೆ ಅಂತ. ನಿನಗೊಂದು ದೃಷ್ಟಿ ಬೊಟ್ಟು ಇಟ್ಟೇ ಹೊರಗಡೆ ಕಳುಹಿಸ್ಬೆಕು ನೋಡು ಯಾವುದಕ್ಕೂ ನನ್ನ ಕುತ್ತಿಗೆಗೆ ನಿನ್ನ ಕೈ ಇಂದ ಮೂರು ಗಂಟು ಬೀಳ್ಲಿ. ಆವಾಗಿದೆ ಮಾರಿಹಬ್ಬ.
ನೀ ನನ್ನ ಸುಂದರ ಸ್ವಪ್ನ ಕಣೋ. ನಿನ್ನ ಕಿರುಬೆರಳು ಹಿಡಿದು ಜಗವ ಸುತ್ತಬೇಕೆಂಬ ಮಹದಾಸೆಯೊಂದಿದೆ, ಇಡೇರಿಸ್ತಿಯಾ? ಅವತ್ತಿನ ಹಾಗೆ ಇನ್ಯಾವತ್ತೂ ಗುಮ್ಮನ ಕಥೆ ಹೇಳಿ ನನ್ನ ಹೆದರಿಸಬೆಡ್ವೋ ಪ್ಲೀಸ್. ನೀ ಕೋಟಿ ಕೋಟಿ ದುಡಿದು ತಂದು ಸೂರಿಯ ಬೇಕು ಅಂತಿಲ್ವೋ, ನೆಮ್ಮದಿಯ ನಾಲ್ಕು ಕಾಸು ಸಂಪಾದನೆ ಸಾಕಷ್ಟೆ. ನಿನ್ನ ಕಷ್ಟ ಸುಖದ ಜೊತೆ ಹೆಜ್ಜೆ ನಾನಾಗಿರ್ತೀನಿ, ನೆರಳಾಗಿ ಜೊತೆಗೆ ನೀ ಇರು ಅಷ್ಟೆ. ಪುಟ್ಟ ಪುಟ್ಟ ಕನಸುಗಳ ಸರಮಾಲೆ ಇದೆ, ಸಮಯ ಬಂದಾಗ ನಾ ತಿಳಿಸ್ತೀನಿ. ಹಾ ನಿನಗೆ ತಿಳಿಯದೇ ಇರುವುದೆನೂ ಅಲ್ಲ ಅದು.
ನಿನ್ನ ಪ್ರೀತಿಯಲಿ ಮಿಂದುಂಡು ಖುಷಿಯಾಗಿದಿನೋ. ನಮ್ಮ ಕನಸುಗಳಿಗ್ಯಾವ ಕಾಟವಿಲ್ಲದಿರಲಿ. ಬಹುಬೇಗ ನಮ್ಮಿಬ್ಬರ ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟುವಂತಾಗ್ಲಿ. ಪೇ ಪೇ ಡುಂ ಡುಂ ಶಬ್ಧ ಕೆಳ್ಬೆಕು ಅನ್ನಿಸ್ತಿದೆ ನಿನ್ನ ಜೊತೆ ಮಂಟಪದೊಳಗೆ ಕೂತು. ಅರಿಶಿಣದಿಂದ ನನ್ನ್ ಮೈ ಬೇಗ ತೊಯ್ಯುವಂತೆ ಮಾಡ್ತಿಯ ಅಲ್ವಾ?
ಕನಸುಗಳ ಸರಮಾಲೆ ಕಣ್ಣೆದುರು ಕಟ್ಟಿರಲು
ಬದುಕು ನೀನೇ ಎಂಬ ಭರವಸೆ ಮನಕಿರಲು
ಕನಸೇ ಬದುಕಾಗಿ ,ನಗುವೇ ಜೀವನವಾಗಿ,
ಜೀವಕೆ ನೀ ಜೊತೆಯಾಗಿರಲು.... ಇನ್ನೇನು ಬೇಕು ಹೇಳು?
ಕಾಯ್ತಿರ್ತಿನ್ ಕಣೋ ರಾಕ್ಷಸ..........
ಸಾವಿರ ಕೋಟಿ ಸಿಹಿ ಮುತ್ತು ನಿನ್ನ ಹಣೆಗೆ ಕೆನ್ನೆಗೆ.
ಒಂದು ಸಲ ಅಲ್ಲ ಸಾವಿರ ಸಲ ನಿನ್ನ ಹೆಸರನ್ನ ಕೂಗ್ತಾ ಇರ್ತೀನಿ, ಏನೋ ಇವಾಗ? ನಾನು ಅಂದ್ರೆ ನಿಂಗೆ ಎಷ್ಟು ಇಷ್ಟಾ ಅಂತ ಪದೇ ಪದೇ ಕೇಳ್ತಾನೆ ಇರ್ತೀನಿ ನಿಂಗೇನಾದ್ರೂ ತೊಂದ್ರೇನಾ ಉತ್ತರ ಕೊಡೋಕೆ?
ಬರಗಾಲದಲ್ಲಿ ಸುರಿದ ತುಂತುರು ಮಳೆಹನಿಯಂತೆ ನೀ ನನಗೆ ಸಿಕ್ಕಿದ್ದು ನೆನಪಿದೆಯೇನೋ? ಅದೇನೋ ಭಯಂಕರ ವಾಗಿ ಸದ್ದುಮಾಡ್ತಿದ್ದೆ ಮೊದಮೊದಲೆಲ್ಲ , ಎಷ್ಟು ಅಹಂಕಾರವಿತ್ತು ನಿನಗೆ, ನನ್ನ ಮೂದಲಿಸಿ ಹಿಂಸಿಸಿ ಹಂಗಿಸಿ ಮತಾಡಿಸ್ತಿದ್ದೆ. ವಂಡರ್ ಗಪ್ಪೆ ಅಂತೆಲ್ಲ ಕರೀತಿದ್ಯಲ್ಲೋ ಬಿಳಿ ಜಿರಳೆ.. ಅದ್ಯಾವಾಗ ನಿನ್ನ ಪ್ರೇಮ ಪಾಶದಲ್ಲಿ ಸಿಲುಕಿದ್ನೋ ನಾ ಕಾಣೆ. ಎಂದೂ ದೇವರಿಗೆ ಕೈ ಮುಗಿಯದವಳು ಅವತ್ತು ಶರಣಾಗಿದ್ದೆ. ತುಪ್ಪದ ದೀಪದ ಪುಣ್ಯ ಅವತ್ತು ದೇವರ ಪಾಲಿಗಿತ್ತು. ನಾ ಹಸನಾಗಿದ್ದೆ ಹಾಡಿ ಕುಣಿದಿದ್ದೆ. ಬಹುಶಃ ನನ್ನ ಖುಷಿಯ ಚೀರಾಟ ದೆವರಿಗೂ ತಲುಪಿದ್ದಿರಬೇಕು, ಮಳೆರಾಯ ಧೋ ಅಂತ ಸುರಿದಿದ್ದ ಭೂರಮೆಯ ಜೊತೆ ನಾನೂ ತೊಯ್ದು ತೊಪ್ಪೆಯಾಗಿದ್ದೆ. ಪ್ರಥಮಬಾರಿಗೆ ಪುಳಕಗೊಂಡಿದ್ದೆ. ಅವತ್ತೇ ಕಣೋ ನಾನು ತೀರಾ ದೊಡ್ಡವಳಾಗಿಬಿಟ್ಟಿದೀನಿ ಅನ್ಸಿದ್ದು. ಎಲ್ಲ ನಿನ್ನಿಂದಾನೆ ಕಣೋ ಪಾಪಿ.
ಪಾಪದ ಈ ಹುಡುಗೀನ ಬುಟ್ಟಿಗೆ ಹಾಕ್ಕೊಂಡು ಹೆಂಗೆ ಮೆರಿತಿದಿಯ ನೋಡು. ಕೈಗೆ ಸಿಗು, ಮೈ ಕೈ ಪರಚಿ ಹಾಕದಿದ್ರೆ ನಾನು ಪೂರ್ವಿಯೇ ಅಲ್ಲ. ನನ್ನ ಹೆಸರನ್ನ ನಿನಗಿಷ್ಟದ ಹಾಗೆ ಸುಬ್ಬುಲಕ್ಷ್ಮಿ ಅಂತ ಬದಲಾಯಿಸಿಕೊಳ್ಳೊದು ನಿಶ್ಚಿತ ನೋಡು.
ಲೋ ಗೆಳೆಯ. ನೀನಂದ್ರೆ ನಂಗಿಷ್ಟ ಕಣೋ. ನೀನೇ ನನ್ನ ಪರಪಂಚ ಕಣೋ. ಸಾವಿರ ಕೋಟಿ ವರುಶಗಳನೂ ಕೂಡ ನಿನ್ನ ಜೊತೆಗೆ ಕಳೆಯುವ ಆಣೆ ಅದ್ಯಾವಾಗ್ಲೋ ಮಾಡಾಗಿದೆ ಗೊತ್ತಾ?. ಮಳೆಗಾಲದಲ್ಲಿ ನಿನ್ನ ಗುಬ್ಬಿಯಂತೆ ತಬ್ಬಿ ಓಡಾಡಿದ ದಿನಗಳ ಅದ್ಹೇಗೋ ಮರೀಲಿ?
ನಿನ್ನ ಕರ್ಕಶ ಕಂಠದ ಸುಂದರ ಹಾಡುಗಳನ್ನ ಕೊಲೆ ಮಾಡಬೇಕೆನಿಸುತ್ತಿದ್ದಿದ್ದೂ ನಿಜ ಪುಣ್ಯಾತ್ಮ. ನಿನ್ನ ಆಲಿಂಗನದಲ್ಲಿ ಅದೂ ಜೋಗುಳವೇ.
ಅಪ್ಪ ಅಮ್ಮ ಹತ್ತಿರ ಇಲ್ಲವೆಂಬ ಕೊರಗು ನೀಗಿಸಿದವ ನೀನೇ ಅಲ್ಲವೆನೋ? ನಿನ್ನ ತೊಡೆಯ ಮೇಲೆ ಮಲಗಿ ಅದೆಷ್ಟು ಪುಸ್ತಕಗಳ ಓದಿಲ್ಲ ಹೇಳು. ಅದೆಷ್ಟು ಸಾವಿರ ಸುಂದರ ಸ್ವಪ್ನಗಳ ಕಂಡಿಲ್ಲ ಹೇಳು. ನಿನಗೆ ತಿಳಿಯದ್ದು ಏನಾದರೂ ಇದೆಯಾ ಅನ್ನುವ ಪ್ರಶ್ನೆ ನನಗೆ ಇನ್ನೂ ಇದೆ. ನನಗೆ ಧೋ ಅಂತ ಸುರಿಯುವ ಮಳೆಯ ನಡುವೆ ತಣ್ಣನೆ ಐಸ್ಕ್ಯಾಂಡೀ ಸವಿಯುವುದು ಇಷ್ಟ ಅಂತ ನಿಂಗ್ಯಾರೋ ಹೇಳಿದ್ದು? ನನಗೆ ಹಸಿರು ಬಣ್ಣವಿಷ್ಟ, ಉಟಕ್ಕೆ ಅಪ್ಪೆ ಮಿಡಿ ಉಪ್ಪಿನಕಾಯಿ ಇಷ್ಟ, ತಿಳಿಗುಲಾಬಿ ಬಣ್ನದ ಕೊಡೆ ಇಷ್ಟ, ಶಿವಮೊಗ್ಗೆಯ ಆಸುಪಾಸಿನ ಬಟಾ ಬಯಲುಗಳಲಿ ದಾರ ಕಾಡಿದ ಗಾಳಿಪಟದ ಹಾಗೆ ನನ್ನ ಪುಟ್ಟ ಸೈಕಲ್ಲಿನಲಿ ಕೂತು ಊರು ಸುತ್ತುವುದಿಷ್ಟ, ಕದ್ದು ತಿನ್ನುವ ಪೇರಳೆ ಇಷ್ಟ, ಇವೆಲ್ಲದರ ಮಾಹಿತಿ ನಿನಗ್ಯಾರೋ ಕೊಟ್ಟೊರು? ಒಟ್ಟಾರೆ ನನ್ನ ಹಾಳು ಮಾಡಿದ್ದು ನೀನೇ. ನನಗೆ ಬೇಕಿರ್ಲಿಲ್ಲ ಈ ಪ್ರೀತಿ ಪ್ರೇಮ ಪ್ರಣಯ,! ಯಾತನೆ ಕಣೋ ನೀ ಇಲ್ದೆ. ಆದರೂ ನಿನ್ನ ಜೊತೆಗಿದ್ದ ಸಮಯದ ನೆನಪೇ ಒಂಥರಾ ಹಿತ.
ನೀ ಜೊತೆಗಿದ್ರೆ ನನಗದೇಷ್ಟು ಧರ್ಯ ಗೊತ್ತಾ? ಸಾವಿರ ಆನೆಯ ಬಲ. ನಿನ್ನ ಕೆನ್ನೆ ಕಚ್ಚಿ ತಿಂದು ಬಿಡುವಾ ಅನ್ನಿಸುತ್ತೆ ಕಣೋ ರಾಕ್ಷಸ. ನಿನಗೆ ನೋಯುತ್ತಲ್ವಾ ಅಂತ ಸುಮ್ಮನಿದಿನಿ ಅಷ್ಟೇ. ಹಾ ನನ್ನ ಗೆಳತಿಯರಿಗೆಲ್ಲ ಒಂದು ಸಾರ್ತಿ ವಾರ್ನ್ ಮಾಡಿದೀನಿ. ನೀ ನನ್ ಜೊತೆ ಇರೋವಾಗ ಅವರು ಹತ್ತಿರ ಸುಳಿಯುವ ಹಾಗಿಲ್ಲ ಅಂತ. ಯಾರಿಗೊತ್ತು ಯಾರಾ ದೃಷ್ಟಿ ಹೇಗಿರುತ್ತೆ ಅಂತ. ನಿನಗೊಂದು ದೃಷ್ಟಿ ಬೊಟ್ಟು ಇಟ್ಟೇ ಹೊರಗಡೆ ಕಳುಹಿಸ್ಬೆಕು ನೋಡು ಯಾವುದಕ್ಕೂ ನನ್ನ ಕುತ್ತಿಗೆಗೆ ನಿನ್ನ ಕೈ ಇಂದ ಮೂರು ಗಂಟು ಬೀಳ್ಲಿ. ಆವಾಗಿದೆ ಮಾರಿಹಬ್ಬ.
ನೀ ನನ್ನ ಸುಂದರ ಸ್ವಪ್ನ ಕಣೋ. ನಿನ್ನ ಕಿರುಬೆರಳು ಹಿಡಿದು ಜಗವ ಸುತ್ತಬೇಕೆಂಬ ಮಹದಾಸೆಯೊಂದಿದೆ, ಇಡೇರಿಸ್ತಿಯಾ? ಅವತ್ತಿನ ಹಾಗೆ ಇನ್ಯಾವತ್ತೂ ಗುಮ್ಮನ ಕಥೆ ಹೇಳಿ ನನ್ನ ಹೆದರಿಸಬೆಡ್ವೋ ಪ್ಲೀಸ್. ನೀ ಕೋಟಿ ಕೋಟಿ ದುಡಿದು ತಂದು ಸೂರಿಯ ಬೇಕು ಅಂತಿಲ್ವೋ, ನೆಮ್ಮದಿಯ ನಾಲ್ಕು ಕಾಸು ಸಂಪಾದನೆ ಸಾಕಷ್ಟೆ. ನಿನ್ನ ಕಷ್ಟ ಸುಖದ ಜೊತೆ ಹೆಜ್ಜೆ ನಾನಾಗಿರ್ತೀನಿ, ನೆರಳಾಗಿ ಜೊತೆಗೆ ನೀ ಇರು ಅಷ್ಟೆ. ಪುಟ್ಟ ಪುಟ್ಟ ಕನಸುಗಳ ಸರಮಾಲೆ ಇದೆ, ಸಮಯ ಬಂದಾಗ ನಾ ತಿಳಿಸ್ತೀನಿ. ಹಾ ನಿನಗೆ ತಿಳಿಯದೇ ಇರುವುದೆನೂ ಅಲ್ಲ ಅದು.
ನಿನ್ನ ಪ್ರೀತಿಯಲಿ ಮಿಂದುಂಡು ಖುಷಿಯಾಗಿದಿನೋ. ನಮ್ಮ ಕನಸುಗಳಿಗ್ಯಾವ ಕಾಟವಿಲ್ಲದಿರಲಿ. ಬಹುಬೇಗ ನಮ್ಮಿಬ್ಬರ ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟುವಂತಾಗ್ಲಿ. ಪೇ ಪೇ ಡುಂ ಡುಂ ಶಬ್ಧ ಕೆಳ್ಬೆಕು ಅನ್ನಿಸ್ತಿದೆ ನಿನ್ನ ಜೊತೆ ಮಂಟಪದೊಳಗೆ ಕೂತು. ಅರಿಶಿಣದಿಂದ ನನ್ನ್ ಮೈ ಬೇಗ ತೊಯ್ಯುವಂತೆ ಮಾಡ್ತಿಯ ಅಲ್ವಾ?
ಕನಸುಗಳ ಸರಮಾಲೆ ಕಣ್ಣೆದುರು ಕಟ್ಟಿರಲು
ಬದುಕು ನೀನೇ ಎಂಬ ಭರವಸೆ ಮನಕಿರಲು
ಕನಸೇ ಬದುಕಾಗಿ ,ನಗುವೇ ಜೀವನವಾಗಿ,
ಜೀವಕೆ ನೀ ಜೊತೆಯಾಗಿರಲು.... ಇನ್ನೇನು ಬೇಕು ಹೇಳು?
ಕಾಯ್ತಿರ್ತಿನ್ ಕಣೋ ರಾಕ್ಷಸ..........
ಸಾವಿರ ಕೋಟಿ ಸಿಹಿ ಮುತ್ತು ನಿನ್ನ ಹಣೆಗೆ ಕೆನ್ನೆಗೆ.
ನಿನ್ನ ಸುಬ್ಬುಲಕ್ಷ್ಮಿ.
No comments:
Post a Comment